Source images Kannada kids Stories
ಅಜ್ಜಿ ಹೇಳಿದ ಕಥೆ: ತಂದೆಯ ಜಾಣ್ಮೆ
ಪುಟ್ಟಿ ರಕ್ಷಾ ಬಂಧನದ ದಿನ ಬೇಸರ ಮಾಡಿಕೊಂಡು ಕುಳಿತಿದ್ದಳು. ನನಗೆ ಅಣ್ಣ ಇಲ್ಲ. ರಾಖಿ ಕಟ್ಟಬೇಕು ಎಂದು ಅಳುತ್ತಿದ್ದಳು. ಅಮ್ಮ ಎಷ್ಟು ಸಮಾಧಾನ ಮಾಡಿದರು ಸರಿಯಾಗಲಿಲ್ಲ. ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಿದ್ದಳು. "ನನಗೆ ಅಣ್ಣ ಬೇಕು...." ಎಂದು ಅಳುವುದು ಜೋರಾಯಿತು. ತಂದೆಗೆ ತಲೆಬಿಸಿಯಾಯಿತು. ಆಗ ಒಂದು ಉಪಾಯ ಮಾಡಿದರು. ಅಂಗಡಿಗೆ ಹೋಗಿ ಸುಂದರವಾದ
ರಾಖಿಗಳನ್ನು ತಂದರು. ನಂತರ ಅಕ್ಕಪಕ್ಕದ ಮನೆಯ ಮಕ್ಕಳನ್ನೆಲ್ಲ ಕರೆದು ಒಂದೊಂದು ರಾಖಿ ನೀಡಿ "ನಿಮ್ಮ ಪುಟ್ಟ ತಂಗಿಗೆ ಪ್ರೀತಿಯಿಂದ ರಾಖಿ ಕಟ್ಟಲು ಹೇಳಿ.." ಎಂದರು. ರಕ್ಷಾ ಬಂಧನಕ್ಕೆ ಮೆರುಗು ಬಂದಿತು. ಮನೆಗೆ ಬಂದ ಮಕ್ಕಳಿಗೆ ಸಿಹಿಯನ್ನು ಹಂಚಿದರು. ಮಕ್ಕಳಿಗೂ ಖುಷಿಯಾಯಿತು. ಪುಟ್ಟಿಗೆ ಕೂಡ ಎಲ್ಲಿಲ್ಲದ ಸಂಭ್ರಮ.
- ಸಿಂಧು ಭಾರ್ಗವ, ಬೆಂಗಳೂರು
No comments:
Post a Comment