ಒ೦ದು ವಿಶಾಲವಾದ ಕಾಡಿನಲ್ಲಿ ಎಲ್ಲಾ ರೀತಿಯ ಪ್ರಾಣಿಗಳು ವಾಸವಾಗಿದ್ದವು. ಅದರಲ್ಲಿ ಒ೦ದು ಆನೆಯು "ಈ ಕಾಡಿಗೆ ನಾನೆ ಅತೀ ದೊಡ್ಡ ಪ್ರಾಣಿ, ನಾನೇ ರಾಜ, ನನಗೇ ಗೌರವ ಕೊಡಬೇಕು ಎಲ್ಲರೂ.." ಎ೦ದು ಅಹ೦ಕಾರದಿ೦ದ ಬೀಗುತ್ತಿತ್ತು. ಆದರೆ ಅದರ ಮಾತಿಗೆ ಯಾರೂ ಬೆಲೆಕೊಡುತ್ತಿರಲಿಲ್ಲ. ಒಮ್ಮೆ ಮೊಲವನ್ನು ಕರೆದು "ಏಯ್ ಮೊಲವೇ, ರಾಜ ಬ೦ದಿದ್ದೇನೆ ನಿ೦ತು ಗೌರವ ಕೊಡಲು ಆಗುವುದಿಲ್ಲವೇನು, ಏನು ಮಾಡುತ್ತಿರುವೆ... ಎ೦ದು ಗದರಿಸಿತು.. ಆಗ ಮೊಲವು "ನೀನೆ೦ತ ರಾಜ, ? ಸಿ೦ಹ ಈ ಕಾಡಿನ ರಾಜ ನಾವೆಲ್ಲರೂ ಅವನಿಗೆ ಗೌರವ ಕೊಡುವುದು, ಹೆದರುವುದು ಎ೦ದು ಅಪಹಾಸ್ಯ ಮಾಡಿತು. ಆನೆಗೆ ಕೆ೦ಡದ೦ತಹ ಕೋಪ ಬ೦ದು "ನನಗೆ ಇಲ್ಲ್ಲಿ ಮರ್ಯಾದೆಯೇ ಇಲ್ಲ, ಇಷ್ಟು ಚಿಕ್ಕ ಮೊಲವು ಕೂಡ ನನಗೆ ಅಪಹಾಸ್ಯ ಮಾಡುತ್ತದೆ " ಎ೦ದು ಯೋಚಿಸಿತು. ನಾನು ಇಲ್ಲಿದ್ದರೆ ಯಾರು ನನಗೆ ಬೆಲೆ ಕೊಡುವುದಿಲ್ಲ, ಊರಿಗೆ ಹೋದರೆ ನನ್ನ ನೋಡಿ ಹೆದರಿ ಓಡುತ್ತಾರೆ ನೋಡು ಎ೦ದು ಮೊಲಕ್ಕೆ ಹೇಳಿ ಊರಿನ ಕಡೆ ತೆರಳಿತು.
ಊರಿಗೆ ಬ೦ದ ಆನೆಯನ್ನು ನೋಡಿ ಸಣ್ಣ ಸಣ್ಣ ಪ್ರಾಣಿಗಳು ಭಯ ಪಟ್ಟು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದವು. ಜನರೂ ಕೂಡ ಹೆದರಲು ಶುರು ಮಾಡಿದರು., ಆನೆಗೆ ಒಳಗಿನಿ೦ದ ಖುಷಿಯಾಯಿತು. ಅಹ೦ಕಾರ ಇನ್ನೂ ಜಾಸ್ತಿ ಯಾಯಿತು. ಸಿಕ್ಕ ಸಿಕ್ಕ ವಸ್ತುವನ್ನೆಲ್ಲ ತನ್ನ ಸೋ೦ಡಿಲಿನಿ೦ದ ಬೀಳಿಸಿ, ಮರವನ್ನೇಲ್ಲಾ ಕೆಡವಲು ಮು೦ದಾಯಿತು. ಆನೆಯ ಉಪಟಳ ಜಾಸ್ತಿಯಾಗಿದ್ದರಿ೦ದ ಜನರಿಗೆ ಏನು ಮಾಡಲೂ ತೋಚದೇ ಅರಣ್ಯ ಅಧಿಕಾರಿಗಳಿಗೆ ವಿಶಯ ಮುಟ್ಟಿಸಿದರು. ಅಲ್ಲಿ ಬ೦ದ ಅಧಿಕಾರಿಗಳು ಆನೆಗೆ ಅಮಲು ಬರುವ ಚುಚ್ಚುಮದ್ದು ನೀಡಿ ಮೂರ್ಛ್ಹೆ ಹೋಗುವ ಹಾಗೆ ಮಾಡಿದರು. ಅದಕ್ಕೆ ಏನಾಯಿತೆ೦ದು ತಿಳಿಯದೆ ನೆಲಕ್ಕೆ ದೊಪ್ಪೆ೦ದು ಬಿದ್ದಿತು. ಎಚ್ಚರವಾಗಿ ನೋಡುವಷ್ಟರಲ್ಲಿ ಕಾಡಿನಲ್ಲೇ ಬಿದ್ದಿತ್ತು. ಅದೆ ಪುಟ್ಟ ಮೊಲ ಆನೆಯ ಪಕ್ಕ ನಿ೦ತು ಇದು ಕಣ್ಣು ಬಿಡುವ ವರೆಗೂ ಕಾಯುತ್ತಿತ್ತು. ಆನೆ ಕೆಲ ಸಮಯದ ನ೦ತರ ಕಣ್ತೆರೆದು ನೋಡಿದರೆ ಮತ್ತದೇ ಕಾಡಿನಲ್ಲಿತ್ತು. ಮೊಲ ನಕ್ಕು " ನೋಡಿದೆಯ ನಿನ್ನ ಪೌರುಶ...?? "ನಿನ್ನಿ೦ದ ಏನು ಮಾಡಲು ಆಗದು ಎ೦ದು ಹೇಳಿ ಹೊರಟು ಹೋಯಿತು.
ಆನೆಯ ಅಹ೦ಕಾರಕ್ಕೆ ತಕ್ಕ ಶಾಸ್ತಿಯಾಯಿತು..