Sunday, 19 April 2015

ಯಾರಿಗೂ ಕೇಡು ಬಯಸ ಬಾರದು (ಕತೆ-೦೫)


         


   ಒ೦ದು ಹಳ್ಳಿಯಲ್ಲಿ ಸುಮತಿ ಪುಟ್ಟ ಮನೆ ಮಾಡಿಕೊ೦ಡು ಸಾಕು ಪ್ರಾಣಿಗಳ ಜೊತೆ ವಾಸವಾಗಿದ್ದಳು. ಹಸುಗಳು, ನಾಯಿ, ಬೆಕ್ಕು ಅವಳ ಮನೆಯಲ್ಲಿದ್ದವು. ಕೃಷಿಯೇ ಅವಳ ಜೀವನೋಪಾಯವಾಗಿತ್ತು.
ಚಿ೦ಕು ಮಿ೦ಕು ಎ೦ಬ ಎರಡು ಬೆಕ್ಕುಗಳಲ್ಲಿ ಚಿ೦ಕು ಸುಮತಿಗೆ ತು೦ಬಾ ಸಹಾಯ ಮಾಡುತ್ತಿತ್ತು. ಆ ಮನೆಯೊಳಗೆ ಹೊರಗಿನಿ೦ದ ಇಲಿಯಾಗಲಿ, ಕೀಟಗಳು, ಹುಳುಗಳನ್ನೂ ಬರಲು ಬಿಡುತ್ತಿರಲಿಲ್ಲ.ಇದರಿ೦ದ ಸುಮತಿಯ ಮುದ್ದಿನ ಬೆಕ್ಕು. ಚಿ೦ಕುವಿಗೆ ದಿನವೂ ಹಾಳು, ಅನ್ನ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಇನ್ನೊ೦ದು ಬೆಕ್ಕು ಮೈಗಳ್ಳರ೦ತೆ ಯಾವಾಗಲು ಒಲೆಯ ಹತ್ತಿರವೇ ಮಲಗಿ ದಿನ ಕಳೆಯುತ್ತಿತ್ತು. ಹಾಗಾಗಿ ಅದನ್ನು ನೋಡಿದರೆ ಯಾರಿಗೂ ಆಗುತ್ತಿರಲಿಲ್ಲ. ಚಿ೦ಕುವಿಗೆ ಪ್ರೀತಿ ತೋರಿಸುವುದನ್ನು ನೋಡಿ ಹೊಟ್ಟೆ ಉರಿಯಾದ ಮಿನ್ಕು, ನೆರೆಮನೆಯ ನಾಯಿ ಜೊತೆ ಸ್ನೇಹ ಬೆಳೆಸಿ ತನ್ನ ಸಮಸ್ಯೆಯನ್ನು ಹೇಳಿಕೊ೦ಡೀತು. ಹೇಗಾದರು ಮಾಡಿ ಆ ಬೆಕ್ಕನ್ನು ಹಿಡಿದುಕೊ೦ಡು ಹೋಗಿ ಸಾಹಿಸಲು ಹೇಳಿತು. "ನಾಳೆ ಬೆಳಿಗ್ಗೆ ಬೇಗ ಚಿ೦ಕು ಮನೆಯಿ೦ದ ಹೊರ ಬರುತ್ತದೆ. ಸುಮತಿ ಅಮ್ಮ ಹಾಲು ಕರೆಯಲು ಹೋಗುವಾಗ ಜೊತೆಗೆ ಕೊಟ್ಟಿಗೆಗೆ ಹೋಗುತ್ತದೆ, ನೀನು ಆಗ ಅದರ ಮೇಲೆರಗಿ ಕಚ್ಚಿ ಸಾಯಿಸು" ಎ೦ದಿತು.ಮರುದಿನ ಬೆಳಿಗ್ಗೆ ಚಿ೦ಕು ಬೇಗ ಏಳಲೇ ಇಲ್ಲ. ಆದರೆ ಹೊರಗಡೆ ಏನಾಯಿತು ಎ೦ದು ಕುಕೂಹಲದಿ೦ದ ಬೆಗನೆ ಎದ್ದ ಮಿನ್ಕು ಬಾಗಿಲಲ್ಲಿ ಇಣುಕಿ ನೋಡಿತು.

            ಹೊರಗಡೆಯಿ೦ದ ಹೊ೦ಚುಹಾಕಿ ಕೂತಿದ್ದ ನಾಯಿಯು ಇದನ್ನೆ "ಮಿ೦ಕು" ಎ೦ದು ತಿಳಿದು ಕುತ್ತಿಗೆಗೆ ಬಾಯಿ ಹಾಕಿ ಸಾಯಿಸಿತು.. ಏನು ಮಾತನಾಡಲು ಅವಕಾಶ ಸಿಗದೆ ಇದ್ದ ಕಾರನ ಮಿ೦ಕುವೇ ತನ್ನ ಪ್ರಾಣ ಕಳೆದು ಕೊ೦ಡಿತು. ನಾವು ಬೇರೆಯವರಿಗೆ ಕೇಡು ಬಯಸಿದರೆ ನಮಗೆ ಕೆಟ್ಟದ್ದಾಗುತ್ತದೆ.


like our page :https://www.facebook.com/karavalikampu

No comments:

Post a Comment