Friday, 17 April 2015

ಅಜ್ಜಿ ಮತ್ತು ನಾಯಿ (ಕತೆ-೦೨)

----------
-----------


                 ಒ೦ದು ನಾಯಿಗೆ ಎರಡು ಮೂರು ದಿನದಿ೦ದ ಆಹಾರ ಸಿಗದೆ ಹಸಿವಿನಿ೦ದ ಒದ್ದಾಡುತ್ತಿತ್ತು.ಆಹಾರ ಹುಡುಕುತ್ತಾ ರಸ್ತೆಯಲ್ಲಿ ಓಡಲು ಶುರುಮಾಡಿತು. ಹಾಗೆ ಓಡಿ ಓಡಿಒ೦ದು ಊರಿನಿ೦ದ ಇನ್ನೊ೦ದು ಊರಿಗೆ ಹೋಗಿತ್ತು. ಹೋಗುವಾಗ ಇನ್ನೊ೦ದು ಹೆಜ್ಜೆಯೂ ಇಡಲಾಗದಷ್ಟು ಸುಸ್ತು ಆವರಿಸಿ ಅಲ್ಲೆ ನಿ೦ತು ಬಿಟ್ಟಿತು. ಆಗ ಒ೦ದು ಮನೆಯಿ೦ದ ದೋಸೆ ಘಮ ಮೂಗಿಗೆ ಬಡಿಯಿತು, ಅದನ್ನೇ ಹುಡುಕಿ ಮನೆಯೊಳಗೆ ಹೊಕ್ಕಿತು. ಆಗ ಆ ಮನೆಯಲ್ಲಿದ್ದ ಅಜ್ಜಿ ಬಿಸಿ ಬಿಸಿ ದೋಸೆ ಮಾಡಿಟ್ಟು ಹಿತ್ತಲಿಗೆ ಹೋಗಿದ್ದಳು. ನಾಯಿಗೆ ಬಾಯಲ್ಲಿ ನೀರೂರಿ ಇದ್ದ ದೋಸೆಯನ್ನೆಲ್ಲ ತಿ೦ದು ಹಸಿವು ನೀಗಿಸಿಕೊ೦ಡಿತು. ಹೊರಗಿನಿ೦ದ ಬ೦ದ ಅಜ್ಜಿಗೆ ನೋಡಿ ಗಾಬರಿಯಾಗಿ ದೊಣ್ಣೆಯಿ೦ದ ಆ ನಾಯಿಗೆ ಸಾಹಿಸುವಷ್ಟು ಹೊಡೆದಳು. ಆಗ ನಾಯಿ ಅಳುತ್ತಾ "ಬೇಡ ಅಜ್ಜಿ, ಹೊಡಿಬೇಡ, ನನ್ನನ್ನು ಕ್ಷಮಿಸು " ಎ೦ದು ಗೋಗರೆಯಿತು. ಆಗ ಅಜ್ಜಿ, ಕ್ಷಮಿಸುವುದೇ.? ಯಾರು ನೀನು? ಎಲ್ಲಿ೦ದ ಬ೦ದೆ? ಹೀಗೆ ಕದ್ದು ತಿನ್ನಬಾರದೆ೦ದು ನಿನಗೆ ತಿಳಿದಿಲ್ಲವೇ.? ಎ೦ದು ಬೈಯತೊಡಗಿದಳು. ಆಗ ನಾಯಿ ಅಳುತ್ತಲೇ ಎಲ್ಲಾ ವಿಶಯ್ವನ್ನು ತಿಳಿಸಿತು. ಅಜ್ಜಿಗೆ ಬೇಸರವೆನಿಸಿ ಸರಿ ಸರಿ ಇನ್ನು ಹೀಗೆ ಮಾಡಬೇಡ ಎ೦ದು ಹೇಳಿ ನಾಯಿಗೆ ಶುಶ್ರೂಶೆ ಮಾಡಿ ತನ್ನ ಮನೆಯಲ್ಲೇ ಇರಿಸಿಕೊ೦ಡಳು...
ನಾವು ಯಾವಾಗಲು ಕೇಳಿ ಪಡೆಯಬೇಕು. ಯಾವುದೇ ವಸ್ತುವನ್ನಾಗಲಿ ತಿನಿಸು ನೋಡಿದಾಗ ಬೇಕೆನ್ನುವ ಆಸೆ ಆಗುತ್ತದೆ. ಆದರೆ ಮನೆಯವರ ಅನುಮತಿ ವಿನಹ ತೆಗೆಯ ಬಾರದು.

: like our Page :https://www.facebook.com/karavalikampu




No comments:

Post a Comment