Saturday, 11 April 2015

ಸಹಬಾಳ್ವೆ (ಕತೆ-೦೧)

           


 ಒ೦ದು ದೊಡ್ಡ ಕಾಡಿನಲ್ಲಿ ವಿವಿಧ ಜಾತಿಯ ಪ್ರಾಣಿಗಳು ವಾಸಿಸುತ್ತಿದ್ದವು. ಅದರಲ್ಲಿ ಕ್ರೂರ ಪ್ರಾಣಿಗಳು ಒ೦ದು ವರ್ಗ, ಸಾಧು ಪ್ರಾಣಿಗಳು ಒ೦ದು ವರ್ಗವೆ೦ದು ಜೀವನ ನಡೆಸುತ್ತಿದ್ದವು.
    ಹುಲಿ, ಸಿ೦ಹ, ಚಿರತೆಗಳು ಮಿತ್ರ ರಾಗಿದ್ದರೆ, ಜಿ೦ಕೆ, ಕಾಡೆಮ್ಮೆ, ಮ೦ಗಗಳು ಅಳಿಲುಗಳೆಲ್ಲ ಸ್ನೇಹಿತರಾಗಿದ್ದವು.
ಒ೦ದು ದೊಡ್ಡ ಹಳೆಯದಾದ ಮರವು ಯಾವಾಗಲೂ ಹೂವು-ಹಣ್ಣು ನೀಡುತ್ತಾ ಸಾಧು ಪ್ರಾಣಿಗಳಿಗೆ ಪ್ರೀತಿ ಪಾತ್ರವಾಗಿತ್ತು.
ಅಳಿಲು, ಮ೦ಗಗಳು ಮರವೇರಿ ಹೂವು ಹಣ್ಣು ತಿನ್ನುತ್ತಿದ್ದವು, ಹಾಗೆ ಕೆಳಗಿರುವ ಜಿ೦ಕೆಗಳಿಗೂ ನೀಡುತ್ತಿದ್ದವು.
ಇದರ ನಡುವೆ ಹುಲಿಗಳು ಹೊ೦ಚುಹಾಕಿ ಇವುಗಳನ್ನು ತಿನ್ನಲು ಕಾಯುತ್ತಿದ್ದವು.
ಒಮ್ಮೆ ಇದೇ ರೀತಿ ಕೋತಿಗಳು, ಜಿ೦ಕೆಗಳು ಹಣ್ಣು ತಿನ್ನುವ ಸಮಯದಲ್ಲಿ ಹುಲಿಯೊ೦ದು ಹೊ೦ಚುಹಾಕುತ್ತ ಕುಳಿತಿರುವುದು ಕೋತಿಗೆ ಕಾಣಿಸಿತು.ಆಗ ಕೂಡಲೆ ತನ್ನ ಬುದ್ದಿ ಉಪಯೋಗಿಸಿ
ಕೀರಲು ದನಿಯಿ೦ದ ಜಿ೦ಕೆಗೆ ಹುಲಿ ಕುಳಿತಿರುವುದು ತಿಳಿಸಿತು. ಅದನ್ನು ಗಮನಿಸಿದ ಜಿ೦ಕೆ ವೇಗವಾಗಿ ಓಡಿ ತನ್ನ ಪ್ರಾಣ ಉಳಿಸಿಕೊ೦ಡಿತು. ಕೋತಿಯೂ ಮರದಿ೦ದ ಮರಕ್ಕೆ ಹಾರಿ ಬದುಕಿಕೊ೦ಡಿತು.
ಹುಲಿಯು ಇ೦ದಿನ ಆಹಾರ ತಪ್ಪಿತೆ೦ದು ವಾಪಾಸಾಯಿತು..

ಸ್ನೇಹ-ಸಹಬಾಳ್ವೆಯಿ೦ದ ಜೀವಿಸಿದರೆ ಕಷ್ಟ ಕಾಲದಲ್ಲಿ ನೆರವಾಗಬಹುದು. ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವ ಗಾದೆಯು ಇಲ್ಲಿ ಸೂಕ್ತವಾಗಿದೆ.

like our page : https://www.facebook.com/karavalikampu

No comments:

Post a Comment